ಆಡಿ ಬಾರೋ ರಂಗ

ಆಡಿ ಬಾರೋ ರಂಗ
ಅಂಗಾಲ ತೊಳೆದು ನಿನ್ನಾ
ಅಪ್ಪಿ ಮುದ್ದಾಡುವೆ ಅನುಗಾಲ|
ಅಕ್ಕರೆಯಿಂದಲಿ
ಚೊಕ್ಕಮಾಡುತ ನಿನ್ನ
ಸೇವೆಯಮಾಡುವೆ ನೂರು ಕಾಲ||

ಬೆಳ್ಳಿಬಟ್ಟಲ ಹಾಲು
ಹಣ್ಣು ಫಲಹಾರವ ಅಣಿ
ಮಾಡಿರುವೆ ನಿನಗಾಗಿ|
ಅದನ್ನೆಲ್ಲಾ ನೀ ಸೇವಿಸೆ
ಅಮ್ಮಾ ಸಾಕು ಎಂದೊಮ್ಮೆ
ಕರೆಸಿಕೊಳ್ಳುವ ಆಸೆ||

ಬಿಸಿ ಬಿಸಿ ನೀರಲಿ
ಜಳಕ ಮಜ್ಜನ ಮಾಡಿಸಿ
ಜರತಾರಿ ಪೀತಾಂಬರ ತೊಡಿಸಿ
ಮುದ್ದಿಸಿ ಆನಂದಿಸುವೆ ನಿನ್ನಾ|
ಯಾರ ದೃಷ್ಟಿ ತಾಗದಿರಲೆಂದು
ಕಪ್ಪು ಬೊಟ್ಟನೊಂದಿರಿಸಿ
ನೀರಿಂದ ನಿವಾಳಿಸುವೆ||

ತೂಗು ತೊಟ್ಟಿಲ ಕಟ್ಟಿ
ಚೆಂದದ ಜೋಗುಳ ಹಾಡಿ ಲಾಲಿಸುವೆ|
ನಿನ್ನ ಕೈಬೆರಳ ಬಾಯಿಂದ ತೆಗೆದು
ಪ್ರೀತಿಯ ಮುತ್ತಾನೀಡುವೆ|
ನೀನು ಎದ್ದೇಳುವುದರೊಳಗಾಗಿ
ನಿನಗೆ ಸಿಹಿ ತಿಂಡಿಗಳ ಮಾಡುತ
ನಿನ್ನಾ ಸೇವೆಯಲೇ ಈ ಜನ್ಮಕಳೆಯುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯಾರಿದೆ ಹೃದಯ
Next post ಅಗಲಿಕೆ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys